Wednesday, 12 December 2012

ಪ್ರಳಯ
-------
ಪಾಪದ ಕೊಡ ತುಂಬಿರಲು
ಪ್ರಕೃತಿಯು ಮುನಿಯಲು
ಅದುವೇ ಪ್ರಳಯ..
ಸ್ವಾರ್ಥ.. ದ್ರೋಹ.. ದ್ವೇಷ..ಮೋಹ.. ಹೆಚ್ಚಿರಲು
ತನ್ನ ಒಡಲ ಬಗೆದು.. ತಿಂದುಂಡವರ
ಏಕಾಪೋಷಣ ತೆಗೆದುಕೊಳ್ಳದೇ ಬಿಡಳವಳು...
ಭೂಕಂಪ.. ಸುನಾಮಿ.. ಎಬ್ಬಿಸಿ.. ಅಲ್ಲೋಲ-ಕಲ್ಲೋಲವನೆ ಸೃಷ್ಟಿಸುವಳು..
ಬದುಕುಳಿದವರ ಜೀವನದ ಹೋರಾಟವದು..
ಹೋರಾಡದೇ ದಾರಿ ಎಲ್ಲಿಹುದು..
ಹಿಡಿ ಅನ್ನಕ್ಕಾಗಿ ಕಾದಾಟ.. ಬಡಿದಾಟ
ಶಕ್ತಿ ಇದ್ದವ ಉಳಿದು.. ನಿಶಕ್ತರ ಅಳಿಸುವ ಕೊನೆಯ ಆಟ

No comments:

Post a Comment