Wednesday, 12 December 2012

ಅಣ್ಣಾ ಹಜಾರೆ
__________

ಭ್ರಷ್ಟಾಚಾರ ನಿರ್ಮೂಲನೆ ಮಾಡುವೆನೆಂದ... ಅಣ್ಣಾ
ಪ್ರಭಲ ಲೋಕಪಾಲ ಜಾರಿಯಾಗುವವರೆಗೂ ಬಿಡಲಾರೆಯೆಂದ... ಅಣ್ಣಾ
ಮೂರುಬಾರಿ ಉಪವಾಸ ಕೂತು ಸರ್ಕಾರ ನಡುಗಿಸಿದೆಯಲ್ಲ.... ಅಣ್ಣಾ
ದೇಶ ಜನರ ನರನಾಡಿಗಳಲ್ಲಿ ಹುರುಪು ತುಂಬಿದೆ... ಅಣ್ಣಾ
ಭವ್ಯ ಭಾರತದ ಕನಸು ಕಾಣುವಂತೆ ಮಾಡಿದೆಯಲ್ಲ... ಅಣ್ಣಾ
ತಂಡಕಟ್ಟಿ ,ಕೂಗುಹಾಕಿ, ಆಂದೋಲನಮಾಡಿ ,ಭ್ರಷ್ಟರಲ್ಲಿ ನಡುಕ ಹುಟ್ಟಿಸಿದೆ... ಅಣ್ಣಾ
ಪಕ್ಷಕಟ್ಟಿ, ಓಟುಕೇಳಿ, ಅಧಿಕಾರ ಹಿಡಿಯಲು ಸಿದ್ಧನಾದೆ... ಅಣ್ಣಾ
ರಾಜಕೀಯ ಕೊಳಕು ಮೆತ್ತಿಕೊಳ್ಳದಂತೆ ಇರಲು ಸಾಧ್ಯವೇ... ಅಣ್ಣಾ
ಆದರೀಗ ಎಲ್ಲಾ ಮರೆತು ತಣ್ಣಗಾದೆ ...ಅಣ್ಣಾ
ಈ ದೇಶದ ದೌರ್ಭಾಗ್ಯಕೆ ಮರುಗುವಂತೆ ನಿರಾಶೆ ತುಂಬಿದೆ... ಅಣ್ಣಾ
ಒಬ್ಬ ಅಣ್ಣನೇನು.. ಸಾವಿರ ಅಣ್ಣಂದಿರಿಂದಲೂ ಬದಲಾಯಿಸಲಾಗದು ಈ ದೇಶದ ಬಣ್ಣ

No comments:

Post a Comment